•
ಭಾರತದ ನೋಯ್ಡಾದಲ್ಲಿ ಲಸಿಕೆ ತೆಗೆದುಕೊಂಡ 2 ಗಂಟೆಗಳ ನಂತರ 49 ವರ್ಷದ ವ್ಯಕ್ತಿ
ಮೃತಪಟ್ಟಿದ್ದಾನೆ.
•
ಜಮ್ಶೆಡ್ಪುರದಲ್ಲಿ ಲಸಿಕೆ ಹಾಕಿ 70 ವರ್ಷದ ವ್ಯಕ್ತಿ
ಮೃತಪಟ್ಟಿದ್ದಾರೆ.
•
ಮೊರಾದಾಬಾದ್ನಲ್ಲಿ ಲಸಿಕೆ ಇಂದ ಆಸ್ಪತ್ರೆಯ
ನೌಕರರೊಬ್ಬರು ಮೃತಪಟ್ಟಿದ್ದಾರೆ.
•
ಸ್ಕ್ರಾಲ್.ಇನ್ ಪ್ರಕಾರ, ಭಾರತದಲ್ಲಿ ಲಸಿಕೆ ಪಡೆದ ನಂತರ
ಸುಮಾರು 180 ಜನರು ಇಲ್ಲಿಯವರೆಗೆ
ಸಾವನ್ನಪ್ಪಿದ್ದಾರೆ.
ಸರ್ಕಾರದ ಪೂರ್ಣ ಪ್ರಮಾಣದ ವ್ಯಾಕ್ಸಿನೇಷನ್ ಅಭಿಯಾನದ ಶುರುವಾದ ನಂತರ
ಪತ್ರಿಕೆಗಳಲ್ಲಿ ,ಟಿವಿಯಲ್ಲಿ ಬಂದ
ಸುದ್ದಿಯ ದೊಡ್ಡ ಶೀರ್ಷಿಕೆಗಳು ಇವು. ಪರಿಣಾಮವಾಗಿ, ಅನೇಕ ಜನರು ಲಸಿಕೆ ಸುರಕ್ಷತೆಯನ್ನು ಪ್ರಶ್ನಿಸಲು ಪ್ರಾರಂಭಿಸಿದರು.
ಸುಪ್ರೀಂ ಕೋರ್ಟ್ನ ಪ್ರಸಿದ್ಧ ವಕೀಲ ಪ್ರಶಾಂತ್ ಭೂಷಣ್ ಆರಂಭಿಕ
ಡ್ರೈವ್ಗಳಲ್ಲಿ ಲಸಿಕೆಗಳ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು.
ಉತ್ತರ ಪ್ರದೇಶದ 21 ನೇ ಸಿಎಂ ಅಖಿಲೇಶ್ ಕುಮಾರ್ ಯಾದವ್ ಅವರು "ನಾನು
ಈಗ ಲಸಿಕೆ ಪಡೆಯುವುದಿಲ್ಲ. ನನ್ನ ಅನಿಸಿಕೆಯನ್ನ ನಾನು ಹೇಳ್ತಾ ಇದಿನಿ . ಅದೂ ಬಿಜೆಪಿ ಸರ್ಕಾರ
ನೀಡಲಿರುವ ಲಸಿಕೆ ಮೇಲೆ ನನಗೆ ಭರವಸೆ ಇಲ್ಲ ಮತ್ತು ಅದನ್ನು ನಾ ಹೇಗೆ ನಂಬಲಿ? ಓಹ್, ಮುಂದೆ ಹೋಗಿ ಎಲ್ಲಾ . ನಮ್ಮ ಸರ್ಕಾರ ಬಂದಾಗ, ಪ್ರತಿಯೊಬ್ಬರೂ ಲಸಿಕೆ ಉಚಿತವಾಗಿ
ಪಡೆಯುತ್ತಾರೆ. "
https://twitter.com/yadavakhilesh/status/1345357079884820483
ಸಾರ್ವಜನಿಕರು ಸಂದಿಗ್ಧ ಸ್ಥಿತಿಯಲ್ಲಿ ಸಿಲುಕಿದ್ದಾರೆ. ಸಾಮಾಜಿಕ
ಸೆಲೆಬ್ರಿಟಿಗಳು ಎತ್ತಿ ತೋರಿಸಿದ ಕೆಲವು ಕಾಳಜಿಗಳು ಮಾನ್ಯವಾಗಿದ್ದರೆ, ಇತರವು ಸಾರ್ವಜನಿಕರ
ಭಾವನೆಗಳಿಗೆ ಧಕ್ಕೆಗೊಳಿಸಿ , ಸಮಸ್ಯೆಯನ್ನು
ಉಲ್ಬಣಗೊಳಿಸಿವೆ. ಕೆಲವು ಸಮಯದಲ್ಲಿ, ಪಕ್ಷಗಳ ರಾಜಕಾರಣವೂ ಹೊಸ
ಹೊಸ ಸಹ ತಿರುವುಗಳನ್ನು ಪಡೆದುಕೊಂಡಿತು.
ಈಗ ನಾವು ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳೊಣ.
ನೀವು ನಿಜವಾಗಿಯೂ ಲಸಿಕೆ ಪಡೆಯಬೇಕೇ ?
ಸೀದಾ ಸಾದಾ ಉತ್ತರ " ಹೌದು ".
ಲಸಿಕೆಗಳು ಸುರಕ್ಷಿತವಾಗಿದ್ದು, ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕು. ಆದರೆ ಔಷಧಿಗಳು
ಖಾಯಿಲೆಗಳ ಚಿಕಿತ್ಸೆಗೆ ಆದರೆ, ಲಸಿಕೆಗಳು ಹರಡುವ ಅಥವಾ
ಸಾವುನೋವುಗಳನ್ನು ಕಡಿಮೆ ತಡೆಯುವ ಮದ್ದಾಗಿವೆ. ಆದ್ದರಿಂದ, ಲಸಿಕೆ ಎಲ್ಲರಿಗೂ ಅತ್ಯಗತ್ಯ.
ಪದೇ ಪದೇ ಕೇಳಲಾಗುವ ಕೆಲವು ಪ್ರಶ್ನೆಗಳು ಏನೆಂದರೆ :
"ಲಸಿಕೆಗಳನ್ನು ತೆಗೆದುಕೊಳ್ಳುವುದು ಸುರಕ್ಷಿತವೇ? ಇದಲ್ಲದೆ, ಎಲ್ಲರಿಗೂ ಲಸಿಕೆ ಏಕೆ ನೀಡಬೇಕು?". ಲಸಿಕೆಯ ಪಾತ್ರ ಮತ್ತು
ಕಾರ್ಯವಿಧಾನವನ್ನು ನೋಡೋಣ.
ಲಸಿಕೆಗಳು ಅಂದರೆ ಏನು?
![]() |
ಲಸಿಕೆ |
ಲಸಿಕೆ ಮೂಲಕ ನಿಮ್ಮ ದೇಹಕ್ಕೆ ಅಟೆನ್ಯೂಯೇಟ್ ಅಥವಾ ಡೆಡ್ ವೈರಸ್
ಸರಬರಾಜು ಮಾಡಲಾಗುತ್ತದೆ. ಆದ್ದರಿಂದ ನಿಮ್ಮ ದೇಹವು ವೈರಸ್ನಿಂದ ರಕ್ಷಿಸಿಕೊಳ್ಳಲು
ಕಲಿಯುತ್ತದೆ. ಪ್ರತಿಕಾಯಗಳನ್ನು ಉತ್ಪಾದಿಸುವ ಮೂಲಕ ನಿಮ್ಮ ದೇಹವು ರಕ್ಷಣೆ ಕಲಿಯುತ್ತದೆ .
ನಿಮ್ಮ ದೇಹವು ದುರ್ಬಲಗೊಂಡ ವೈರಸ್ ವಿರುದ್ಧ ಹೋರಾಡಲು ಕಲಿತ ನಂತರ, ನಿಜವಾದ
ವೈರಲ್ ಸೋಂಕಿನ ಸಂದರ್ಭದಲ್ಲಿ ನಿಮ್ಮ ದೇಹಕ್ಕೆ ಪ್ರತಿಕಾಯಗಳನ್ನು ಉತ್ಪಾದಿಸುವುದು
ಸುಲಭವಾಗುತ್ತದೆ. ಹೀಗಾಗಿ ನಿಮ್ಮ ದೇಹವು ತನ್ನನ್ನು ಸುಲಭವಾಗಿ ರಕ್ಷಿಸಿಕೊಳ್ಳುತ್ತದೆ.
ವ್ಯಾಕ್ಸಿನೇಷನ್ ಅನ್ನು, ಸ್ಟಾಕ್ ಎಕ್ಸ್ಚೇಂಜ್ನಲ್ಲಿನ
ಸ್ಟಾಕ್ಗೆ ಹೋಲಿಸಬಹುದು. ಎಲ್ಲಾ ಹೂಡಿಕೆಗಳು ಲಾಭದಾಯಕವಾಗುವುದಿಲ್ಲ. ಕೆಲವು ನಷ್ಟ ಕೂಡ
ಇರುತ್ತವೆ. ಅಂತೆಯೇ, ಅಂತೆಯೇ, ಯಾವುದೇ
ಲಸಿಕೆ ನಿಮಗೆ ರೋಗದ ವಿರುದ್ಧ 100% ರಕ್ಷಣೆ ನೀಡಲು ಸಾಧ್ಯವಿಲ್ಲ.
ಜಗತ್ತಿನಲ್ಲಿ ಹಲವಾರು ಲಸಿಕೆಗಳಿವೆ. ಅವುಗಳಲ್ಲಿ ಯಾವುದೂ 100%
ಪರಿಣಾಮಕಾರಿಯಾಗಿಲ್ಲ ಎಂಬುದನ್ನು ನೀವು ಗಮನಿಸಬಹುದು. ಭಾರತದಲ್ಲಿ ಎರಡು ಲಸಿಕೆಗಳಿವೆ ಮತ್ತು 3 ನೇ ಅಂಗೀಕಾರವನ್ನು ಅನುಮೋದಿಸಲಾಗಿದೆ. ಆದರೆ ಅವು 100%
ಪರಿಣಾಮಕಾರಿಯಾಗಿಲ್ಲ. ಲಸಿಕೆ ಹಾಕಿದ ನಂತರವೂ ನೀವು COVID-19 ಅನ್ನು
ಹಿಡಿಯಬಹುದು ಎಂದರ್ಥ. ಇದನ್ನು ಬ್ರೇಕ್ ಥ್ರೂ ಸೋಂಕು ಎಂದು ಕರೆಯಲಾಗುತ್ತದೆ.
ಇದನ್ನು ಆಳವಾದ ಮಟ್ಟದಲ್ಲಿ ಅರ್ಥಮಾಡಿಕೊಳ್ಳಲು, ನಾವು
ಮೊದಲು 'ಸೋಂಕು' ಮತ್ತು 'ರೋಗ' ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳಬೇಕು.
ಸೋಂಕು ಮತ್ತು ರೋಗ:
ಈ ಎರಡು ಶಬ್ದಗಳು ವಿಭಿನ್ನವಾಗಿವೆ ಮತ್ತು ಬೇರೆ ಬೇರೆ ಅರ್ಥ
ನೀಡುತ್ತವೆ.
ಸೋಂಕು , ಎಂಬುದು ಯಾವುದೇ ರೋಗದ ಮೊದಲ ಹಂತವಾಗಿರುತ್ತದೆ. ಬಾಹ್ಯ
ಸೂಕ್ಷ್ಮಾಣುಜೀವಿ ನಿಮ್ಮ ದೇಹಕ್ಕೆ ಪ್ರವೇಶಿಸಿ ಮತ್ತು ನಿಮ್ಮನ್ನು ಹೋಸ್ಟ್ ಆಗಿ ಬಳಸಿ, ಅಲ್ಲೇ ಬೆಳೆಯಲು ಅಥವಾ
ಪುನರಾವರ್ತಿಸಲು ಪ್ರಾರಂಭಿಸುತ್ತವೆ. ಅದನ್ನೇ ಸೋಂಕು ಎನ್ನುವರು.
ಮತ್ತೊಂದೆಡೆ, ಈ ಸೂಕ್ಷ್ಮಾಣುಜೀವಿ ನಿಮ್ಮ ದೇಹದ ಮೇಲೆ ಆಕ್ರಮಣ ಮಾಡಲು
ಪ್ರಾರಂಭಿಸಿದಾಗ ಒಂದು ಕಾಯಿಲೆ/ರೋಗ ಉಂಟಾಗುತ್ತದೆ. ನೀವು ಅನಾರೋಗ್ಯಕ್ಕೆ
ಒಳಗಾಗುತ್ತೀರಿ ಮತ್ತು ಶೀತ ಅಥವಾ ಕೆಮ್ಮಿನಂತಹ ರೋಗಲಕ್ಷಣಗಳನ್ನು ನಿಮ್ಮಲ್ಲಿ ಕಂಡು ಬರಲು
ಶುರುವಾಗುತ್ತವೆ.
ಅದರ ಅರ್ಥ,
ಸೋಂಕು ಅತಿಥಿಯ ತರ ದೇಹ ಪ್ರವೇಶಿಸುತ್ತದೆ
,
ರೋಗ ಅನ್ನೋದು ಸೋಂಕನ್ನು ಬಳಸಿ ದೇಹದ ಮೇಲೆ ಆಕ್ರಮಣ ಮಾಡುತ್ತದೆ.
ದಾಯಾದಿಗಳ ತರ
ಲಸಿಕೆ ಪರೀಕ್ಷೆಗಳನ್ನು ಹೇಗೆ ನಡೆಸಲಾಗುತ್ತದೆ?
ಲಸಿಕೆ ಪರೀಕ್ಷಾ ಪ್ರಯೋಗಗಳನ್ನು ನಡೆಸಿದಾಗ, ಭಾಗವಹಿಸುವವರನ್ನು ಎರಡು
ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಒಂದು ಗುಂಪು ನಿಜವಾದ ಲಸಿಕೆಯನ್ನು ಪಡೆಯುತ್ತದೆ ಮತ್ತು
ಇನ್ನೊಂದು ಗುಂಪು ಅದನ್ನು ಪಡೆದಿದೆ ಎಂದು ನಂಬುತ್ತದೆ ಆದರೆ ಅದು ಪಡೆದಿರಲ್ಲ. ಇದನ್ನು ಪ್ಲಸೀಬೊ
ಎಫೆಕ್ಟ್ ಅಥವಾ ನಕಲಿ ಲಸಿಕೆ ಎಂದು ಕರೆಯಲಾಗುತ್ತದೆ. ನಿಜವಾದ ಲಸಿಕೆ ಯಾರಿಗೆ ಸಿಗುತ್ತದೆ ಮತ್ತು
ಯಾರು ಪಡೆಯುವುದಿಲ್ಲ ಎಂದು ಹೇಳಲು ಸಂಶೋಧಕರಿಗೆ ಕೂಡ ಸಾಧ್ಯವಾಗುವುದಿಲ್ಲ.
ನಿಯಮಗಳನ್ನು ಅನುಸರಿಸಿ, ಈ ಗುಂಪುಗಳಿಗೆ ಸಾಮಾನ್ಯ ಜೀವನ ನಡೆಸಲು ಹೇಳುತ್ತಾರೆ, ಮತ್ತು ಸಂಶೋಧಕರು ಈ
ಸ್ವಯಂಸೇವಕರನ್ನು ಅಧ್ಯಯನ ಮಾಡುವುದನ್ನು ಮುಂದುವರಿಸುತ್ತಾರೆ. ಕಾಲಾನಂತರದಲ್ಲಿ, ವಿಜ್ಞಾನಿಗಳು COVID-19 ನ ಲಕ್ಷಣಗಳನ್ನು
ಹೊಂದಿರುವವರನ್ನು ಪರಿಶೀಲಿಸುತ್ತಾರೆ. ಲಸಿಕೆ ಹಾಕಿದ ಗುಂಪಿನಲ್ಲಿ ರೋಗಿಗಳ ಸಂಖ್ಯೆ ಕಡಿಮೆಯಿದ್ದರೆ, ಲಸಿಕೆ ಪರಿಣಾಮಕಾರಿಯಾಗಿದೆ ಎಂಬ
ನಿರ್ಧಾರಕ್ಕೆ ಬರುತ್ತಾರೆ.
ಹೀಗಾಗಿ, ನೀವು ಅನಾರೋಗ್ಯಕ್ಕೆ
ಒಳಗಾಗುತ್ತೀರೋ ಇಲ್ಲವೋ ಎಂದು ಲಸಿಕೆ ಅಳೆಯುತ್ತದೆ. ಆದರೆ ನೀವು ಸೋಂಕಿಗೆ ಒಳಗಾಗಿದ್ದೀರೋ
ಇಲ್ಲವೋ ಎಂದು ಇದು ಅಳೆಯುವುದಿಲ್ಲ.
ಸೋಂಕನ್ನು ಅಳೆಯಲು, ಪ್ರತಿಯೊಬ್ಬರನ್ನು ವೈದ್ಯಕೀಯವಾಗಿ ಪರೀಕ್ಷಿಸುವ ಅಗತ್ಯವಿದೆ.
ಆದರೆ ವಿಜ್ಞಾನಿಗಳು ರೋಗದ ಲಕ್ಷಣಗಳನ್ನು ತೋರಿಸುವವರನ್ನು ಮಾತ್ರ
ಪರೀಕ್ಷಿಸುತ್ತಾರೆ. ಲಸಿಕೆ ಹಾಕಿದ ನಂತರವೂ ನೀವು ಸೋಂಕಿಗೆ ಒಳಗಾಗಬಹುದು ಎಂದು ಇದು ನಮಗೆ
ಸ್ಪಷ್ಟಪಡಿಸುತ್ತದೆ.
ಲಸಿಕೆ ಹಾಕಿದ ನಂತರವೂ ನೀವು ಏಕೆ ಅನಾರೋಗ್ಯಕ್ಕೆ ಒಳಗಾಗುತ್ತೀರಿ?
ಇದರಿಂದ ಕೇವಲ ಅನಾರೋಗ್ಯಕ್ಕೆ ಒಳಗಾಗುವುದಲ್ಲ; ಒಮ್ಮೊಮ್ಮೆ ಕೆಲವು ಜನರು
ಸಾಯಬಹುದು.
ಆದರೆ ಅದು ಏಕೆ ಸಂಭವಿಸುತ್ತದೆ?
ಅಮೆರಿಕದ ರೋಗನಿರೋಧಕ ತಜ್ಞ ಎರಿನ್ ಬ್ರೊಮೇಜ್ ಅವರ
ಪ್ರಕಾರ ಲಸಿಕೆಗಳು ಅಣೆಕಟ್ಟುಗಳಂತೆ ಇರುತ್ತವೆ . 100% ಪರಿಣಾಮಕಾರಿ ಆಗಿರುವಂತಹ ಯಾವುದೇ ಅಣೆಕಟ್ಟು ಜಗದಲ್ಲಿ
ಇಲ್ಲ. ನೀರಿನ ಮಿತಿಯು ಅಪಾಯ ಮಟ್ಟವನ್ನು ಮೀರಿದರೆ ದೊಡ್ಡ ಅಣೆಕಟ್ಟು ಕೂಡ ವಿಫಲವಾಗಬಹುದು. ಲಸಿಕೆಗಳು
ಇದಕ್ಕೆನು ಹೊರತಾಗಿಲ್ಲ.
ಆದ್ದರಿಂದ, ಬ್ರೇಕ್ ಥ್ರೂ ಸೋಂಕು ಎಂಬ ಪದವನ್ನು ಸೃಷ್ಟಿಸಲಾಯಿತು.
ಬ್ರೇಕ್ ಥ್ರೂ ಸೋಂಕು :
ಹಲವಾರು COVID ಪ್ರಕರಣಗಳು ಇರುವ
ಪರಿಸರದಲ್ಲಿ ಸೋಂಕು ತುಂಬಾ ಜಾಸ್ತಿಯಾಗಿ ಹರಡುತ್ತದೆ ಎಂದು ತಜ್ಞರು ವಾದಿಸುತ್ತಾರೆ. ಹೀಗಾಗಿ, ನೀವು ಲಸಿಕೆ ಹಾಕಿಸಿಕೊಂಡು
ಭಾರತದಲ್ಲಿ ವಾಸಿಸುತ್ತಿದ್ದರೆ, ನೀವು ಸೋಂಕಿಗೆ ಒಳಗಾಗುವ
ಸಾಧ್ಯತೆಯಿದೆ, ಏಕೆಂದರೆ ದೇಶವು
ದಿನಕ್ಕೆ ಸಾವಿರಾರು ಪ್ರಕರಣಗಳನ್ನು ದಾಖಲಿಸುತ್ತಿದೆ, ಸಿಂಗಾಪುರಕ್ಕೆ ಹೋಲಿಸಿದರೆ ಇದು ದಿನಕ್ಕೆ 10 ಕ್ಕಿಂತ ಕಡಿಮೆ ಪ್ರಕರಣಗಳನ್ನು
ದಾಖಲಿಸುತ್ತಿದೆ.
ಒಂದು ಪ್ರದೇಶದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು
ಹೊರತುಪಡಿಸಿ, ಹಲವಾರು ಇತರ ಅಂಶಗಳು ಬ್ರೇಕ್ ಥ್ರೂ ಸೋಂಕುಗಳಿಗೆ ಕಾರಣವಾಗಿರಬಹುದು. ಉದಾಹರಣೆಗೆ, ಇಮ್ಯುನೊಕೊಪ್ರೊಮೈಸ್ಡ್
( ಪ್ರತಿರೋಧಕ ಶಕ್ತಿ ಕಳೆದು ಹೋದ ) ವ್ಯಕ್ತಿಯು COVID-19ಗೆ ಬೇಗ ತುತ್ತಾಗುವ ಸಾಧ್ಯತೆಯಿದೆ.
ಇಮ್ಯುನೊಕೊಪ್ರೊಮೈಸ್ಡ್ ವ್ಯಕ್ತಿಗಳು ಬಲವಾದ ರೋಗನಿರೋಧಕ ಶಕ್ತಿಯನ್ನು ಹೊಂದಿರುವುದಿಲ್ಲ. ಇವರು
ಮಧುಮೇಹ, ಕ್ಯಾನ್ಸರ್
ಮತ್ತು ಎಚ್ಐವಿ ಮುಂತಾದ ವೈದ್ಯಕೀಯ ಹಿನ್ನೆಲೆ ಹೊಂದಿರುವವರು ಆಗಿರುತ್ತಾರೆ. ಹೀಗಾಗಿ, ಅವರು ಲಸಿಕೆ
ಪಡೆದರೂ ಸಹ, ಅವರನ್ನು COVID-19 ಪ್ರಾಣಾಪಾಯಕ್ಕೆ ತಳ್ಳಬಹುದು.
ನೀವು ಲಸಿಕೆಯ ಎರಡೂ ಪ್ರಮಾಣವನ್ನು ಪಡೆದರೂ ಸಹ ನೀವು 100% ಸುರಕ್ಷಿತರಲ್ಲ. ಏಕೆಂದರೆ ನೀವು ಸಂಪೂರ್ಣವಾಗಿ ರೋಗನಿರೋಧಕ ಶಕ್ತಿ ಹೊಂದಲು 2 ವಾರಗಳು
ತೆಗೆದುಕೊಳ್ಳುತ್ತದೆ. ಹೀಗಾಗಿ, ಲಸಿಕೆಯ ಮೊದಲ ಪ್ರಮಾಣವನ್ನು ಪಡೆದವರು ಅಥವಾ ಇತ್ತೀಚೆಗೆ ಎರಡನೇ ಪ್ರಮಾಣವನ್ನು ಪಡೆದವರು
ಪಾಸಿಟಿವ್ ಆಗುವ ಸಾಧ್ಯತೆಗಳಿವೆ.
ಲಸಿಕೆ ಹಾಕಿಸಿಕೊಂಡ ವ್ಯಕ್ತಿಯಲ್ಲಿ ಸೋಂಕು ಕಂಡು ಬಂದರೂ, ಅದು
ಮಾರಣಾಂತಿಕವಾಗಿ ಇರುವುದಿಲ್ಲ. ರೋಗದ ತೀವ್ರತೆಯನ್ನು ಇದು ಕಮ್ಮಿ ಮಾಡುತ್ತದೆ.
ಇಸ್ರೇಲ್ ದೇಶವು 5000 ರೋಗಿಗಳ ಮೇಲೆ ಈ ಬಗ್ಗೆ ಅಧ್ಯಯನ ನಡೆಸಿತು.
ನೀವು ನಿಮಗಾಗಿ ಮಾತ್ರವಲ್ಲ, ಲಸಿಕೆ
ಹಾಕಿಕೊಂಡು ನಿಮ್ಮ ಸುತ್ತಮುತ್ತಲಿನ ಜನರಿಗೆ ಸಹ ಒಳ್ಳೆಯದನ್ನು ಮಾಡುತ್ತೀರಿ.
•
ಲಸಿಕೆ ಪಡೆದವರು ಮತ್ತು
ಯಾವುದೇ ಲಸಿಕೆ ಪಡೆಯದವರು ಇದರಲ್ಲಿ ಪಾಲ್ಗೊಂಡಿದ್ದರು.
•
ಲಸಿಕೆ ಪಡೆದ ವ್ಯಕ್ತಿಯು
ಸೋಂಕಿಗೆ ಒಳಗಾದಾಗ, ಅವನ / ಅವಳ ದೇಹದಲ್ಲಿ ವೈರಸ್ನ ತೀವ್ರತೆ ಬಹಳ ಕಡಿಮೆ ಎಂದು ಅಧ್ಯಯನವು ತೋರಿಸಿದೆ. ಇದರರ್ಥ
ಅವರ ದೇಹದಲ್ಲಿ COVID-19 ನ ಲಕ್ಷಣಗಳು ತುಂಬಾ ಕಡಿಮೆ ಆಗಿ ಕಾಣಿಸಿಕೊಳ್ಳುತ್ತವೆ.
•
ಒಮ್ಮೆ ನೀವು ಲಸಿಕೆ ಪಡೆದ
ನಂತರ ನೀವು ಮಾರಣಾಂತಿಕ ಸೋಂಕಿಗೆ ತುತ್ತಾಗುವ ಸಾಧ್ಯತೆ ಕಡಿಮೆ ಮತ್ತು ಇತರರಿಗೆ ವೈರಸ್ ಹರಡುವ
ಸಾಧ್ಯತೆ ಕೂಡ ಕಡಿಮೆ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ. ಅದಕ್ಕಾಗಿಯೇ ನೀವು ಲಸಿಕೆ ಪಡೆಯಲು
ಸಂಶೋಧಕರು ಸೂಚಿಸುತ್ತಿದ್ದಾರೆ.
ಈ ಸೋಂಕುಗಳ ಬಗ್ಗೆ ಅಧ್ಯಯನ ಮಾಡಲು ಸರ್ಕಾರಕ್ಕೆ
ಸಾಕಷ್ಟು ಮಾಹಿತಿ ಇಲ್ಲ ಎಂದು ಇಂಡಿಯಾ ಸ್ಪೆಂಡ್ ವರದಿಯಲ್ಲಿ ಬಹಿರಂಗಪಡಿಸಿದೆ. ಭಾರತದಲ್ಲಿ
ವ್ಯಾಕ್ಸಿನೇಷನ್ ಕಾರ್ಯಕ್ರಮವು 2021 ರ ಜನವರಿಯಲ್ಲಿ ಪ್ರಾರಂಭವಾಯಿತು, ಆದರೆ ಏಪ್ರಿಲ್ 7 ರವರೆಗೆ ಪರೀಕ್ಷಾ ಕೇಂದ್ರಗಳು ರೋಗಿಗಳಿಗೆ ಲಸಿಕೆ
ಹಾಕಲಾಗಿದೆಯೇ ಅಥವಾ ಇಲ್ಲವೇ ಎಂದು ಎಲ್ಲೂ ಕ್ರೂಢಿಕರಿಸಿಲ್ಲ.
ಏಪ್ರಿಲ್ 7 ರ ನಂತರ ಬದಲಾದ ಫಾರ್ಮ್ಗಳು, ಜನವರಿ ಮತ್ತು ಏಪ್ರಿಲ್ ನಡುವೆ ಲಸಿಕೆ ಹಾಕಿದ ಮತ್ತು ಪರೀಕ್ಷಿಸಿದವರ ದತ್ತಾಂಶ
ಇಲ್ಲದಿರುವುದನ್ನು ಎತ್ತಿ ತೋರಿಸುತ್ತದೆ.
ICMR ಆ ತಿಂಗಳುಗಳ ಡೇಟಾವನ್ನು ಹೊಂದಿಲ್ಲ.
ಆದರೆ ಇನ್ನೂ, ಭಾರತದ ICMR ಸೋಂಕುಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ಐಸಿಎಂಆರ್ ಪ್ರಕಾರ, ಪ್ರತಿ 10
ಸಾವಿರ ಲಸಿಕೆ ಹಾಕಿದ ಜನರಲ್ಲಿ ಕೇವಲ 2-4 ಮಂದಿ ಮಾತ್ರ
ಸೋಂಕು ಉಂಟಾಗಿದೆ. ಇದು ಒಳ್ಳೆಯ ಸುದ್ದಿ ಏಕೆಂದರೆ ಇದರಿಂದ ಬ್ರೇಕ್ ಥ್ರೂ ಸೋಂಕುಗಳು
ವಿರಳವಾಗಿ ಕಾಣುತ್ತವೆ.
Post Vaccination Break Through Infection (20th Apr 2021) |
ಅಮೆರಿಕದಂತಹ ಇತರ ದೇಶಗಳಲ್ಲಿ ನಡೆಸಿದ ಅಧ್ಯಯನಗಳು
ಬ್ರೇಕ್ ಥ್ರೂ ಸೋಂಕುಗಳು ತಕ್ಕಮಟ್ಟಿಗೆ ಕಡಿಮೆ ಇವೆ ಎಂದು ತೋರಿಸಿವೆ.
ಲಸಿಕೆ ಹಾಕಿದ ನಂತರ ನೀವು ಮಾಸ್ಕನ್ನು ಧರಿಸುವುದನ್ನು
ಮತ್ತು COVID-19 ಪ್ರೋಟೋಕಾಲ್ಗಳನ್ನು ಅನುಸರಿಸುವುದನ್ನು ನಿಲ್ಲಿಸಬಾರದು. ನೀವು ವೈರಸ್ಗೆ ಹೆಚ್ಚು
ಒಡ್ಡಿಕೊಳ್ಳುವುದರಿಂದ, ನೀವು ಬ್ರೇಕ್ ಥ್ರೂ ಸೋಂಕಿಗೆ ಒಳಗಾಗುವ ಸಾಧ್ಯತೆಗಳು
ಹೆಚ್ಚು.
ಹೈದರಾಬಾದ್ ಮೂಲದ ವೈದ್ಯರ ಪ್ರಕಾರ " ನಿಮ್ಮ
ದೇಹಕ್ಕೆ ವೈರಸ್ ಪ್ರವೇಶಿಸುವುದನ್ನು ತಡೆಯಲು ಸಾಧ್ಯವಿಲ್ಲ ಲಸಿಕೆಗೆ ಸಾಧ್ಯವಿಲ್ಲ. ಅದಕ್ಕೆ
ಮಾಸ್ಕ ಬೇಕೇ ಬೇಕು. ಲಸಿಕೆ ಕೇವಲ ಓಳ ಬಂದ ವೈರಸ್ ವಿರುದ್ಧ ಹೋರಾಡುತ್ತದೆ."
ಮಾಸ್ಕ ಮಾತ್ರವೇ ವೈರಸ್ ಪ್ರವೇಶವನ್ನು
ನಿರ್ಬಂಧಿಸಬಹುದು.
ವದಂತಿಗಳು:
ವದಂತಿಯ ವಿಶ್ವವಿದ್ಯಾಲಯ ಎಂದು ಕರೆಯಲ್ಪಡುವ ವಾಟ್ಸಾಪ್
ವದಂತಿಯ ಹರಡುವಿಕೆಯ ತಾಣವಾಗಿದೆ. ಲಸಿಕೆಯ ಬಗ್ಗೆ ಕಟ್ಟು ಕಥೆಗಳು ಫಾಸ್ಟ್ ಮೆಸೇಜಿಂಗ್
ಅಪ್ಲಿಕೇಶನ್ನಲ್ಲಿ ಹರಿದಾಡುತ್ತಿದೆ. ಅವುಗಳಲ್ಲಿ ಕೆಲವು ಇಂತಿವೆ , ಹುಡುಗಿಯರು, ಉದಾಹರಣೆಗೆ, ತಮ್ಮ ಮುಟ್ಟಿನ
ಅವಧಿಗಳ ಮೊದಲು ಮತ್ತು ನಂತರದ 5 ದಿನಗಳವರೆಗೆ ಲಸಿಕೆಗಳನ್ನು ಹಾಕಿಸಿಕೊಳ್ಳಬಾರದು. COVID-19 ವ್ಯಾಕ್ಸಿನೇಷನ್ಗಳು
ಪುರುಷ ಬಂಜೆತನಕ್ಕೆ ಕಾರಣವಾಗುತ್ತವೆ. ಈ ವದಂತಿಗಳನ್ನು ತಜ್ಞರು ನಿರಾಕರಿಸಿದ್ದಾರೆ.
ಸ್ತ್ರೀರೋಗತಜ್ಞರು ಮುಟ್ಟಿನ ಸಮಯದಲ್ಲಿ ಲಸಿಕೆಯ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು
ಹೇಳಿದ್ದಾರೆ. ಆದರೆ ಬಂಜೆತನದ ವದಂತಿಯ ಬಗ್ಗೆ, ಈ ಮನಸ್ಥಿತಿಯು ಭಾರತದ ತುರ್ತು
ಪರಿಸ್ಥಿತಿಯಿಂದಾಗಿರಬಹುದು. ಆ ಸಮಯದಲ್ಲಿ ಹಲವಾರು ಬಲವಂತದ ಬಂಜೆತನ ಕಾರ್ಯಕ್ರಮಗಳು ನಡೆದವು.
ಭಾರತದ ಜನಸಂಖ್ಯೆಯನ್ನು ಕಡಿಮೆ ಮಾಡಲು ಸಂಜಯ್ ಗಾಂಧಿ ಇಂತಹ ಚುಚ್ಚುಮದ್ದನ್ನು
ತೆಗೆದುಕೊಳ್ಳುವಂತೆ ಜನರನ್ನು ಒಮ್ಮೆ ಒತ್ತಾಯಿಸಿದ್ದರು.
![]() |
Fake Rumours |
ಅಸ್ಟ್ರಾಜೆನೆಕಾದ ಕೋವಿಶೀಲ್ಡ್ ಲಸಿಕೆ ರಕ್ತ
ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ ಎಂದು ಅನೇಕರು ಹೇಳುತ್ತಾರೆ. ಇದನ್ನು ಅನೇಕರಲ್ಲಿ
ಗಮನಿಸಿದ್ದರೂ,
ತಜ್ಞರು ಅಪಾಯ ಕಡಿಮೆ ಎಂದು ಸೂಚಿಸಿದ್ದಾರೆ.
ಮತ್ತು ಅಪಾಯದ ಹೊರತಾಗಿಯೂ ಲಸಿಕೆ ತೆಗೆದುಕೊಳ್ಳುವುದು ಉತ್ತಮ ಎಂದು ಅಭಿಪ್ರಾಯ
ಪಟ್ಟಿದ್ದಾರೆ.
ಎರಡನೇ ಅಲೆ ಹಿಂದೆ ಮುಖ್ಯ ಕಾರಣ ಏನೆಂದರೆ
ನಾಗರಿಕರಲ್ಲಿ ಲಸಿಕೆಯ ಕೊರತೆ. ಏಪ್ರಿಲ್ 25 ರ ಹೊತ್ತಿಗೆ, ಜನಸಂಖ್ಯೆಯ ಕೇವಲ 1.6% ರಷ್ಟು ಜನರು ಎರಡೂ ಪ್ರಮಾಣದ ಲಸಿಕೆಗಳನ್ನು 8.6% ರಷ್ಟು ಪಡೆದಿದ್ದಾರೆ. ಯುಎಸ್ಎ ಅಂಕಿಅಂಶಗಳು 28.9% ಮತ್ತು 42.6%. ಮತ್ತು ಯುಕೆಗೆ 18.9% ಮತ್ತು 50.5%.
ಭಾರತವು ಹರ್ಡ್ ಇಮ್ಮನಿಟಿ ಬೆಳೆಸಲು ನೋಡುತ್ತಿದೆ, ಒಟ್ಟು ಜನಸಂಖ್ಯೆಯ 70%ಗೆ ಲಸಿಕೆ ಹಾಕಿದರೆ ವೈರಸ್ ಹರಡುವಿಕೆಯು
ಕನಿಷ್ಠವಾಗಬಹುದು. ಆದರೆ ನಾವು ಹೋಗುತ್ತಿರುವ ವೇಗ ನೋಡಿದರೆ, 70% ಜನಸಂಖ್ಯೆಯು ಲಸಿಕೆಯ ಮೊದಲ ಪ್ರಮಾಣವನ್ನು ಪಡೆಯಲು ಕನಿಷ್ಠ16 ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ. ಮತ್ತು ಎರಡನೇ ಡೋಸ್ ಪಡೆಯಲು ಸುಮಾರು 9 ವರ್ಷಗಳು ಹಿಡಿಯಬಹುದು.
ಮುಖ್ಯ ಕಾರಣ ಎಂದರೆ, ಬೇರೆ ರಾಷ್ಟ್ರಗಳಿಗೆ ಔಷಧಿಗಳ ಪೂರೈಕೆಯಿಂದಾಗಿ ಹೆಚ್ಚಿನ ವಿಳಂಬವಾಗಿತ್ತು. ಇದರ
ಪರಿಣಾಮವಾಗಿ,
ಈಗ ಭಾರತ ಸರ್ಕಾರ ರಫ್ತು ನಿಷೇಧಿಸಿದೆ ಮತ್ತು ಮೂರನೇ ಲಸಿಕೆಯನ್ನು ಅನುಮೋದಿಸಿದೆ.
ನಾವು ಜವಾಬ್ದಾರಿಯುತ ನಾಗರಿಕರಾಗಿ ಕಾರ್ಯನಿರ್ವಹಿಸೋಣ
ಒಬ್ಬ ವ್ಯಕ್ತಿಗಿಂತ ಮೊದಲು ದೇಶ ಬರಬೇಕು. ಈ ಹಿಂದೆ ವ್ಯಾಕ್ಸಿನೇಷನ್ ಡ್ರೈವ್ ಅನ್ನು ನಂಬಿಕೆಯ ಕೊರತೆ ಎಂದು ಚಿತ್ರಿಸಿದ ಅಖಿಲೇಶ್ ಯಾದವ್ ಅವರಿಗೆ ಒಮರ್ ಅಬ್ದುಲ್ಲಾ ಪ್ರತಿಕ್ರಿಯಿಸಿರುವ ತಿಳುವಳಿಕೆ ನಮ್ಮೆಲ್ಲರಿಗೂ ಬರಬೇಕು.
I don’t know about anyone else but when my turn comes I’ll happily roll up my sleeve & get a COVID vaccine. This damn virus has been far too disruptive & if a vaccine helps bring about a semblance of normalcy after all the chaos then sign me up. https://t.co/bVOw7lPJ6w
— Omar Abdullah (@OmarAbdullah) January 2, 2021
ಲಸಿಕೆಗಳನ್ನು ನೀಡುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೆಲಸ. ಆದರೆ ಲಸಿಕೆ ಪಡೆಯುವುದು ನಮ್ಮ ಕೆಲಸ. ನೀವು ಲಸಿಕೆ ಪಡೆಯಿರಿ ಮತ್ತು ಲಸಿಕೆ ಪಡೆಯಲು ನಿಮ್ಮ ಸುತ್ತಲಿನ ಜನರಿಗೆ ಮನವರಿಕೆ ಮಾಡಿ. ಇದು ಅವರಿಗೆ ಮಾತ್ರವಲ್ಲ ಅವರ ಕುಟುಂಬಕ್ಕೂ ನಿರ್ಣಾಯಕವಾದದ್ದು.
ನಿಮ್ಮ ಆರೋಗ್ಯ ಅಥವಾ ನಿಮ್ಮ ಕುಟುಂಬಸ್ಥರ ಆರೋಗ್ಯವನ್ನು ನೀವು ಗೌರವಿಸದಿದ್ದರೆ, ನಿಮ್ಮ ಪ್ರೀತಿಯ ಪಾತ್ರದವರಿಗಾಗಿ ಆದರೂ ಲಸಿಕೆ ಪಡೆಯಿರಿ. ದಯವಿಟ್ಟು ಈ ಅಭಿಯಾನದಲ್ಲಿ ರಾಜಕೀಯ ಅಥವಾ ಅಪನಂಬಿಕೆಯನ್ನು ಬೆರೆಸಬೇಡಿ.ನಮ್ಮ ದೇಶದ ಜವಾಬ್ದಾರಿಯುತ ಪ್ರಜೆಯಾಗಿ ಕಾರ್ಯನಿರ್ವಹಿಸೋಣ, ಮತ್ತು ನಿಮ್ಮ ಈ ಸಣ್ಣ ಹೆಜ್ಜೆ
ದೊಡ್ಡ ಬದಲಾವಣೆಯನ್ನು ಮಾಡಬಹುದು.
ಮೂಲಗಳು,
Mostly Inspired By:
ಇದನ್ನು ಇಂಗ್ಲೀಷ್ ನಲ್ಲಿ ಓದಲು, ಇಲ್ಲಿ ಒತ್ತಿ.
2ಕಾಮೆಂಟ್ಗಳು
ಲಸಿಕೆಯ ಕುರಿತಾಗಿ ಜನರಲ್ಲಿ ಇರುವ ಊಹಾಪೋಹಗಳಿಗೆ ಉತ್ತರಿಸುವ ಪ್ರಯತ್ನ ಮಾಡಿದ್ದೀರಿ .....ಧನ್ಯವಾದಗಳು.
ಪ್ರತ್ಯುತ್ತರಅಳಿಸಿಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ವನ್ನು ಬೆಳೆಸುವ ಕಾರ್ಯವು ಮುಂದುವರೆಯಲಿ.
ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಬೆಂಬಲ ಹೀಗೆ ಸದಾ ಕಾಲ ಇರಲಿ ಎಂದು ಆಶಿಸುತ್ತೇನೆ
ಪ್ರತ್ಯುತ್ತರಅಳಿಸಿ